ವನಮಹೋತ್ಸವ ಕಾರ್ಯಕ್ರಮ

10/08/2014 ರಂದು ಅಭಿರುಚಿ ಸಂಸ್ಥೆಯು ಶಿವಮೊಗ್ಗದ ಕಲ್ಲಗಂಗೂರಿನಲ್ಲಿರುವ ಶ್ರೀ ರಾಮಕೃಷ್ಣಾಶ್ರಮದಲ್ಲಿ ವನಮಹೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಆಶ್ರಮದ ಗುರೂಜೀಯವರಿಂದ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ನಂತರ ಕಾರ್ಯಕ್ರಮಕ್ಕೆ ಆಗಮಿಸಿದ್ದ ಅಧ್ಯಕ್ಷರಾದ ಡಾ. ಶಿವರಾಮಕೃಷ್ಣರವರು ಮತ್ತು ಎಲ್ಲಾ ಸದಸ್ಯರೂ ಸಸಿಗಳನ್ನು ನೆಟ್ಟು ನೀರೆರೆದರು.  
ಸಂಜೆ ಗುರೂಜೀ ಯವರಿಂದ ಆಶೀರ್ವವಚನ ಮತ್ತು ಭಜನಾ ಕಾರ್ಯಕ್ರಮಗಳನ್ನು ನಡೆಸಲಾಯಿತು. ರಕ್ಷಾಬಂಧನವನ್ನು ಸಹ ಆಚರಿಸಲಾಯಿತು.